ಸ್ಮಶಾನ, ಗೊಡಚಿ ವೀರಭದ್ರ, ಹಾಗೂ ಸತೀಶ ಜಾರಕಿಹೊಳಿ ಯವರು…..
ಹೆಣ್ಣಿನ ನೆಲಿ , ನೀರಿನ ನೆಲಿ, ಹಾಗೂ ಸತೀಶ್ ಜಾರಕಿಹೊಳಿ ಯವರ ನೆಲಿ, ಯಾರಿಗೂ ಸಿಕ್ಕಿಲ್ಲವೆಂದು ರಾಜ್ಯದ ಜನ ಮಾತನಾಡುತ್ತಿರುತ್ತಾರೆ.
ತಮ್ಮ ಜೀವನ ದುದ್ದಕ್ಕು ಮೌಢ್ಯ ವಿರೋಧಿ ಹಿನ್ನಲೆ, ಸ್ಮಶಾನ ವಾಸ, ರಾಹುಕಾಲದಲ್ಲಿ ನಾಮ ಪತ್ರ ಸಲ್ಲಿಸಿ ಮೌಢ್ಯ ವಿರೋಧಿ ಗಳ ನಾಯಕ ರಾಗಿದ್ದ ಸತೀಶ್ ಜಾರಕಿಹೊಳಿ ಯವರು ನಿನ್ನೆ ರಾಮದುರ್ಗ ತಾಲೂಕಿನ ಗೊಡಚಿ ವೀರಭದ್ರೇಶ್ವರ ನ ದರ್ಶನ ಪಡೆದದ್ದು ಹಲವಾರು ಚಿಂತಕರು ತಮ್ಮದೇ ಧಾಟಿಯಲ್ಲಿ ಚರ್ಚಿಸುತ್ತಿದ್ದಾರೆ.

ಬಹುತೇಕ ಬೆಳಗಾವಿ ಉಪ ಚುನಾವಣೆ ತಯಾರಿ ಯಲ್ಲಿರುವ ಜಾರಕಿಹೊಳಿಯವರು ದೆವ್ವ ಮತ್ತು ದೇವರನ್ನು ಸಂಭಾಳಿಸುವ ಏಕೈಕ ನಾಯಕರಾಗಿ ಹೊರ ಹೊಮ್ಮಲ್ಲಿದ್ದಾರೆ. ಅವರಿಗೆ ಗೊಡಚಿ ವೀರಭದ್ರ ಆಶೀರ್ವದಿಸಲಿ..
ನಿಮ್ಮ
ಬಾಪು ಗೌಡ ಪಾಟೀಲ
Garddi Gammath News Latest Kannada News