ಬಿಸಿ ..ಬಿಸಿ.. ಸುದ್ದಿ …,ಮೂರುಜನ M.L.A. ಗಳ ರಾಜಿನಾಮೆ…?
ಔರ್ ಎ ಗರ್ದಿಗಮ್ಮತ ದೇಖೋ
* ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ದಿಲ್ಲಿ ನೋಡ್ರಿ, ಬೆಂಗಳೂರು ನೋಡ್ರಿ,
*ಸಾಬಾ ಇಷ್ಟ್ ದಿವಸ ಎಲ್ಲಿ ಹಾಳಾಗಿ ಹೋಗಿದ್ಯೋ
* ಹೋಗಿನಿ ಬಿಡ್ರಿ ಸಾಹೇಬ್ರ
* ಸಾಬಾ ಚೋಲೋ ಸುದ್ದಿ ತಂದಿರ್ಬೇಕ್ ಬಿಡೋ
* ಹೌದ್ರಿ ಸಾಹೇಬ್ರ
* ಹಂಗಾದ್ರ ಲಗೂಟ್ ಹೇಳೋ ಸಾಬಾ
*ಸಾಹೇಬ್ರ ಈ ಸುದ್ದಿ ಕೇಳಿ ದಿಲ್ಲಿ ನಡಗತೈತ್ರಿ ಸಾಹೇಬ್ರ
*ಅಂದ್ರ ಕರೋನಾ ಸುದ್ದಿ ಇರ್ಬೇಕು ಬಿಡೋ ಸಾಬಾ
* ದಿಲ್ಲಿ ಸಿಂಹಾಸನ ನಡಗು ಸುದ್ದಿರಿ ಸಾಹೇಬ್ರ
* ಅಂದ್ರ ಮೋದಿ ಅವ್ರೇನೆ ಪ್ರಧಾನಿ ಹುದ್ದೆಕ ರಾಜಿನಾಮೆ ಕೂಡಾತಾರೆನೋ ಸಾಬಾ
* ಅಲ್ರೀ ಸಾಹೇಬ್ರ ಈ ಸುದ್ದಿ ಕೇಳಿ ದಿಲ್ಲಿಗೂಡೆ ಬೆಂಗಳೂರು ನಡಗತೈತ್ರಿ ಸಾಹೇಬ್ರ
* ದಿಲ್ಲಿ ಬೆಂಗಳೂರು ಅಂದ್ರ ವಿಜಯ್ ಮಲ್ಯಾನ ಸುದ್ದಿ ಏನೋ ಸಾಬಾ
* ಅಲ್ಲರಿ ಸಾಹೇಬ್ರ
*ಸಾಬಾ ನನಗ ಭಾಳ ಸಿಟ್ಟ ತರಸ ಬ್ಯಾಡೋ ಲಗೂಟ್ನ ಹೇಳೋ ಸಾಬಾ
* ಸಾಹೇಬ್ರ ಗಡ ಬಡಿ ಮಾಡ ಬ್ಯಾಡರಿ
*ನನ್ನ ಬಿಪಿ ಏರಾ ತೈತೋ ಸಾಬಾ
* ಸಾಹೇಬ್ರ ಮೂರು ಮಂದಿ M. L. A. ಗೋಳು ರಾಜಿನಾಮೆ ಕೂಡಾ ತಾರರಿ
* ದಿಲ್ಲಿ ,ಬೆಂಗಳೂರು, ನಡಗಾಕ ಬಿಜೆಪಿ M. L. A. ಗೊಳ್ ಏನೋ ಸಾಬಾ
*ಸಾಹೇಬ್ರ I T, E D , C B I,ಬಿಜೆಪಿ ಅವರ್ ಕೈಯಾಗ ಇರೋವಾಗ ಆತಾಕತ್ತ.ಯಾರ್ ಮಾಡ್ತಾರರಿ ಸಾಹೇಬ್ರ
*ಮತ್ತJ. D. S . M. L. A . ಗೊಳೆನೋ ಸಾಬಾ
* ಸಾಹೇಬ್ರ ರಾಜಿನಾಮೆ ಕೊಟ್ಟಸೋತ ವಿಶ್ವನಾಥ್ ಹುಚ್ಚ ರಾಂಗ ಅಡ್ಯಾಡಾತೈತ್ರಿ ಸಾಹೇಬ್ರ
*ಹಂಗಾದ್ರ ಕಾಂಗ್ರೆಸ್ M .L. A. ಗೊಳೆನೋ ಸಾಬಾ
* ಹುಲಿಯಂಗ ಕಾಂಗ್ರೆಸ್ ನ್ಯಾಗ ಸತೀಶ್ ಜಾರಕಿಹೊಳಿ ಅವರು ಇರುವಾಗ ಅ ಧೈರ್ಯ ಯಾರ್ ಮಾಡ್ತಾರ ಸಾಹೇಬ್ರ
* ಅಲ್ಲೋ ಸಾಬಾ J.D.S. ಅಲ್ಲಂತಿ B.J.P. ಅಲ್ಲಾಂತಿ CONGRESS ಅಲ್ಲಾಂತಿ ಅವರೆನ್ ಹೊಟ್ಟೆ ಪಕ್ಷದ ರಂಗಸ್ವಾಮಿ ಪಕ್ಷದಾವರೇನೋ ಸಾಬಾ
* ಅಲ್ರೀ ಸಾಹೇಬ್ರ ನಿಮ್ಮಮುಂದ ಖರೇ ಹೇಳ್ತೆನ ಅವರ್ ಬೆಳಗಾವ ಜಿಲ್ಲಾದಾವರ ಅದನ್ನ ಸುದ್ದಿ ತರಾಕ ಹೋಗಿದ್ನಿ
*ಅಂದಗ ಅವರ್ ಹೆಸರ್ ಅಷ್ಟ ಹೇಳೋ ಸಾಬಾ
*ಮುಂದಿನ ವಾರ ಹೇಳ್ತೆನರಿ ಸಾಹೇಬ್ರ
ಬಾಪೂಗೌಡ ಪಾಟೀಲ್